ಕಲರ್ಸ್ ಕನ್ನಡ ವಾಹಿನಿಯ ‘ಗೀತಾ’ ಧಾರಾವಾಹಿ ಮುಕ್ತಾಯವಾಗಿದೆ. ‘ಗೀತಾ’ ಧಾರಾವಾಹಿ ಮುಗಿದ ಬಳಿಕ ನಟಿ ಭವ್ಯಾ ಗೌಡ ಕಟೀಲು ಕ್ಷೇತ್ರ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಫೋಟೋಗಳನ್ನು ಇಲ್ಲಿ ಪರಿಶೀಲಿಸಿ…
‘ಗೀತಾ’ ಖ್ಯಾತಿಯ ಭವ್ಯಾ ಗೌಡ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ನಮಿಸಿದರು
ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಗೀತಾ’ ಧಾರಾವಾಹಿ ನಾಲ್ಕು ವರ್ಷಗಳ ಕಾಲ ಪ್ರಸಾರವಾಗಿತ್ತು. ಸ್ವಾಭಿಮಾನಿ ಗೀತಾ ಪಾತ್ರದಲ್ಲಿ ಭವ್ಯಾ ಗೌಡ ನಟಿಸಿದ್ದಾರೆ. ಈಗ ‘ಗೀತಾ’ ಧಾರಾವಾಹಿ ಮುಗಿದಿದೆ. ‘ಗೀತಾ’ ಧಾರಾವಾಹಿ ಮುಗಿಯುತ್ತಿದ್ದಂತೆ ನಟಿ ಭವ್ಯಾ ಗೌಡ ಧರ್ಮಸ್ಥಳ ಹಾಗೂ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
ಬಂಧುಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಭವ್ಯಾ ಗೌಡ, ಮಂಜುನಾಥ ಸ್ವಾಮಿಗೆ ಭಕ್ತಿಯಿಂದ ನಮಿಸಿದರು. ಅಲ್ಲದೆ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿ ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಟಿ ಭವ್ಯಾ ಗೌಡ ಅವರು ಧರ್ಮಸ್ಥಳ ಮತ್ತು ಕಟೀಲು ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರವಾಸದ ವೇಳೆ ಭವ್ಯಾ ಗೌಡ ಮತ್ತು ಗ್ಯಾಂಗ್ ಕ್ಲಿಕ್ಕಿಸಿದ ಸೆಲ್ಫಿ ಫೋಟೋಗಳನ್ನು ಇಲ್ಲಿ ಪರಿಶೀಲಿಸಿ…
‘ಗೀತಾ’ ಧಾರಾವಾಹಿ ನಂತರ ಮುಂದೇನು? ಎಂಬ ಪ್ರಶ್ನೆ ಭವ್ಯಾ ಅಭಿಮಾನಿಗಳಲ್ಲಿ ಕಾಡುತ್ತಿದೆ. ಭವ್ಯಾ ಮತ್ತೆ ಕಿರುತೆರೆಗೆ ಪ್ರವೇಶಿಸುತ್ತೀರಾ? ಇಲ್ಲವೇ ಬೆಳ್ಳಿತೆರೆಯಲ್ಲಿ ಮಿಂಚುತ್ತಾರಾ ಕಾದು ನೋಡಬೇಕು.