ಜೈಲ್ನಿಂದ ಹೊರಗಡೆ ಬಂದ್ಮೇಲೆ ಒಳ್ಳೆವರ ಸಹವಾಸ ಮಾಡು ಅಪ್ಪ,ನಿನ್ನ ಬಿಟ್ಟು ನಂಗೆ ಯಾರು ಬೇಡ:ಬುದ್ಧಿ ಹೇಳಿದ ಮಗ ವಿನೀಶ್. ಕಣ್ಣೀರಿಟ್ಟ ದರ್ಶನ್

Darshan’s son Vinish:ನಟ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಈತನನ್ನು ಬೆಂಗಳೂರಿನ ಪರಪ್ಪ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ ಆರೋಪ ಇವರ ಮೇಲಿದೆ. ಸದ್ಯ ಜೈಲಿನಲ್ಲಿ ದರ್ಶನ್ ಅವರ ಚಡಪಡಿಕೆ ಮುಂದುವರಿದಿದೆ.ಮಲಗಲು ಆಗುತ್ತಿಲ್ಲ.ಆಹಾರಕ್ಕೆ ಒಗ್ಗುತ್ತಿಲ್ಲ. ಈ ನಡುವೆ ದರ್ಶನ್ ಕುಟುಂಬ ಮೂರು ಬಾರಿ ಜೈಲಿಗೆ ಹೋಗಿ ಬಂದಿತ್ತು. ಜುಲೈ 11ರಂದು ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಸೇರಿದಂತೆ ಕುಟುಂಬಸ್ಥರು ಬಂದು ದರ್ಶನ್ ಅವರನ್ನು ಭೇಟಿ ಮಾಡಿ ಧೈರ್ಯ ಹೇಳಿದರು.

ದರ್ಶನ್ ಭೇಟಿಯಾದಾಗ ವಿಜಯಲಕ್ಷ್ಮಿ ಧೈರ್ಯ ತುಂಬಿದ್ದರು. ಅವರು ಬಟ್ಟೆ ಮತ್ತು ಹಣ್ಣುಗಳನ್ನು ನೀಡಿದರು. ಜೈಲಿನಲ್ಲಿರುವ ತಂದೆಯ ಸ್ಥಿತಿ ಕಂಡು ಮಗ ಕಣ್ಣೀರಿಟ್ಟಿದ್ದಾನೆ. ದರ್ಶನ್ ಕೂಡ ಮಗನನ್ನು ಅಪ್ಪಿಕೊಂಡು ಕಣ್ಣೀರಿಟ್ಟರು.ಜೈಲು ಊಟ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದಾರೆ.

 

 

ಈ ಬಗ್ಗೆ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ವಿಜಯಲಕ್ಷ್ಮಿ ದರ್ಶನ್ ಅವರಿಗೆ ತಿಳಿಸಿದರು. ಸದ್ಯ ನ್ಯಾಯಾಲಯದಲ್ಲಿ ಮನೆ ಊಟ ಒದಗಿಸುವ ಕುರಿತ ಅರ್ಜಿ ವಿಚಾರಣೆ ನಡೆಯುತ್ತಿದೆ. ಜುಲೈ 18 ರಂದು ನಿರ್ಧಾರ ತೆಗೆದುಕೊಳ್ಳಲಾಗುವುದು. ಹೊರಗೆ ನಡೆದ ಘಟನೆಗಳ ಬಗ್ಗೆ ದರ್ಶನ್ ಅವರು ಪತ್ನಿಯ ಬಳಿ ಕೇಳಿ ತಿಳಿದುಕೊಂಡಿದ್ದಾರೆ. ಜಾಮೀನು ಪ್ರಕ್ರಿಯೆ ಕುರಿತು ಕುಟುಂಬ ಸದಸ್ಯರೊಂದಿಗೂ ಚರ್ಚಿಸಲಾಗಿದೆ.

ನಿನ್ನ ಬಿಟ್ಟು ನಂಗೆ ಯಾರು ಬೇಡ,ಇವ್ರ ಸಹವಾಸ ಬೇಡ ಜೈಲ್ನಿಂದ ಹೊರಗಡೆ ಬಂದ್ಮೇಲೆ ಡ್ರೈವರ್ ಲಕ್ಷ್ಮಣ್ ಬಿಟ್ಟು ಒಳ್ಳೆವರ ಸಹವಾಸ ಮಾಡು ಅಪ್ಪ. ನೀನು ಜೈಲಿನಲ್ಲಿ ಇರುವುದು ನೋಡಲು ಆಗುತ್ತಿಲ್ಲ, ಯಾರ ಜೊತೆ ಆಟವಾಡಲಿ, ಯಾರ ಜೊತೆ ಮಾತನಾಡಲಿ, ಯಾರ ಜೊತೆ ಜಗಳವಾಡಲಿ ಎಂದು ಹೇಳುತ್ತಾ ದರ್ಶನ್ ಮಗ ಕಣ್ಣೀರಿಟ್ಟಿದಾನೆ.

 

 

ದರ್ಶನ್ ಮಗನನ್ನು ನೋಡಿ ಖುಷಿ ಪಟ್ಟಿದ್ದಾರೆ. ಮತ್ತೆ ರಾತ್ರಿಯಾಗುತ್ತಿದ್ದಂತೆ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ. ಅವರು ಇತರ ಜೈಲು ಸಿಬ್ಬಂದಿಯೊಂದಿಗೆ ಬರೆಯುತ್ತಿಲ್ಲ. ವ್ಯಾಯಾಮ ಹಾಗೂ ಸರಿಯಾದ ಆಹಾರ ಕ್ರಮವಿಲ್ಲದೆ ದರ್ಶನ್ ಮಾನಸಿಕವಾಗಿ ಕುಗ್ಗಿದ್ದಾರೆ. ಮನೆಯವರು ಬಂದು ಪ್ರೋತ್ಸಾಹಿಸಿದರೂ ದರ್ಶನ್ ಚಡಪಡಿಕೆ ನಿಂತಿರಲಿಲ್ಲ.

Be the first to comment

Leave a Reply

Your email address will not be published.


*