ಕನ್ನಡದ ಖ್ಯಾತ ನಟರಾದ ಶಿವರಾಜ್ ಕುಮಾರ್, ಡಾಲಿ ಧನಂಜಯ್, ಯಶ್, ದರ್ಶನ್, ಸುದೀಪ್ ಎಲ್ಲರೂ ಕೂಡ ಒಂದು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದರೆ ಒಂದು ಗತ್ತು ಗಾಂಭೀರ್ಯವಿರುತ್ತದೆ. ಅವರ ಜೊತೆ ಬಾಡಿಗಾರ್ಡ್ಗಳು ಹಾಗೂ ಹಲವಾರು ನಟ ನಟಿಯರು ಸ್ವಾಗತವನ್ನು ಕೋರುತ್ತಾರೆ ಆದರೆ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟನಾಗಿ ಮೆರೆದಿದ್ದ ಈ ನಟ ಮಾತ್ರ ಅವಕಾಶಗಳಿಂದ ವಂಚಿತರಾಗಿ ಇದೀಗ ಚಿತ್ರದಿಂದ ದೂರವೇ ಉಳಿದಿದ್ದಾರೆ ಇವರು ಒಂದು ಕಾರ್ಯಕ್ರಮದಲ್ಲಿ ಎಲ್ಲರಿಗಿಂತ ಹಿಂದೆ ಒಬ್ಬಂಟಿಯಾಗಿ ನಿಂತಿರುವ ವಿಡಿಯೋ ಇದೀಗ ಎಲ್ಲಾ ಕಡೆ ವೈರಲ್ಲಾಗಿದೆ. ಈ ವಿಡಿಯೋ ನೋಡಿದ ಪ್ರೇಕ್ಷಕರು ಈ ಖ್ಯಾತ ನಟನ ಬಗ್ಗೆ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.
ಈಗಂತೂ ಕನ್ನಡ ಸಿನಿಮಾಗಳ ಕ್ರೇಜ್ ಶುರುವಾಗಿದೆ ಕನ್ನಡ ಸಿನಿಮಾಗಳು ಎಲ್ಲಾ ಉತ್ತಮ ಆಯಾಮಗಳಲ್ಲಿ ಮೂಡಿ ಬರುತ್ತಿವೆ. ಹಲವಾರು ಚಿತ್ರಗಳಲ್ಲಿ ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರನ್ನು ರಂಜಿಸಿದ್ದ ಖ್ಯಾತ ನಟ ಇಂದು ಒಬ್ಬಂಟಿಯಾಗಿ ಉಳಿದುಕೊಂಡಿದ್ದಾರೆ. ಈ ಹತ್ತು ವರ್ಷಗಳ ಹಿಂದೆ ಉದಯ ವಾಹಿನಿಯಲ್ಲಿ ಸತತ ಹತ್ತು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ರಂಗೋಲಿ ಎನ್ನುವ ಧಾರಾವಾಹಿಯಲ್ಲಿ ವಿಕ್ರಮಾದಿತ್ಯ ಎನ್ನುವ ಪಾತ್ರದ ಮೂಲಕ ಹೆಚ್ಚು ಪ್ರಕ್ಯಾತಿಯನ್ನು ಪಡೆದುಕೊಂಡಿದ್ದರು ಅಷ್ಟೇ ಅಲ್ಲದೆ ಉದಯ ಟಿವಿಯಲ್ಲಿ ನ್ಯೂಸ್ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದರೂ.
ಉದಯ ಟಿವಿಯಲ್ಲಿ ವಿಕ್ರಮಾದಿತ್ಯ ಎನ್ನುವ ಪಾತ್ರದ ಮೂಲಕ ರಂಗೋಲಿ ಧಾರವಾಹಿಯಲ್ಲಿ ಸಾಕಷ್ಟು ಜನ ಮನ್ನಣೆಯನ್ನು ಪಡೆದಿದ್ದರು ಇವರ ಮೂಲ ಹೆಸರು ಪ್ರಕಾಶ್ ಎಂಬುದಾಗಿದ್ದು ಮೊದಲು ಉದಯ ಟಿವಿಯಲ್ಲಿ ನ್ಯೂಸ್ ರಿಪೋರ್ಟರ್ ಆಗಿ ನ್ಯೂಸ್ ಓದುವ ಕೆಲಸವನ್ನು ಮಾಡುತ್ತಿದ್ದರು ಅದ್ಭುತವಾದ ನ್ಯೂ ರಿಪೋರ್ಟರ್ ಮತ್ತು ಆಂಕರ್ ಎಂದೆ ಪ್ರಕಾಶ್ ರವರನ್ನು ಹೇಳಬಹುದಾಗಿದೆ.
ರಂಗೋಲಿ ಧಾರವಾಹಿಯ ನಂತರ ಕಾದಂಬರಿ ಎನ್ನುವ ಧಾರವಾಹಿಯಲ್ಲಿ ಕೂಡ ಇವರು ನಟಿಸಿದ್ದಾರೆ. ಉದಯ ಟಿವಿಯಲ್ಲಿ ರಂಗೋಲಿ ಧಾರವಾಹಿ 10 ಹಲವಾರು ವರ್ಷಗಳಿಂದ ಮೂಡಿ ಬರುತ್ತಿತ್ತು ರಂಗೋಲಿ ಧಾರವಾಹಿ ಪ್ರೇಕ್ಷಕರೆಲ್ಲರೂ ಪ್ರೀತಿಯಿಂದ ವೀಕ್ಷಿಸುತ್ತಿದ್ದರು ರಂಗೋಲಿ ಧಾರವಾಹಿಯಲ್ಲಿ ಪ್ರಕಾಶ್ ಸೇರಿದಂತೆ ಸಿರಿ ಎನ್ನುವ ನಟಿ ಒಬ್ಬರು ಅಭಿ ಎನ್ನುವ ಪಾತ್ರವನ್ನು ನಿರ್ವಹಿಸುತ್ತಿದ್ದರು ಈ ದಾರವಾಹಿ ಉದಯ ಟಿವಿಯಲ್ಲಿ ಮುಗಿದು ಹೋದ ನಂತರ ಉದಯ ಟಿವಿ ಟಿ ಆರ್ ಪಿ ಕೂಡ ಕಮ್ಮಿಯಾಯಿತು ನಟ ಪ್ರಕಾಶ್ ಅಂದಿನ ಕಾಲದಲ್ಲಿ ಖ್ಯಾತ ನಟರಾಗಿದ್ದರು ಆದರೆ ಇದೀಗ ಯಾವುದೇ ಅವಕಾಶಗಳು ದೊರಕದೆ ಮೂಲೆಗುಂಪಾಗಿದ್ದಾರೆ.