ಮಗಳನ್ನು ನೋಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೃದ್ಧೆ ಜತೆಗೆ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಪಂಜಾಬ್ನ ಫರೀದ್ಕೋಟ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಸ್ಕಾರ್ಫ್ ಬೈಕ್ನ ಚಕ್ರಕ್ಕೆ ಸಿಲುಕಿ ಬೈಕ್ನ ನಿಯಂತ್ರಣ ತಪ್ಪಿ ಬೈಕ್ನಿಂದ ಕೆಳಗೆ ಬಿದ್ದು ಆಕೆಯ ದೇಹದಿಂದ ಕುತ್ತಿಗೆ ಕೊಯ್ದುಕೊಂಡ ಆಘಾತಕಾರಿ ಘಟನೆ ನಡೆದಿದೆ.
ದೊರೆತ ಮಾಹಿತಿಯ ಪ್ರಕಾರ, ಮುಕ್ತಸರ್ ರಸ್ತೆಯಲ್ಲಿ ವಾಸಿಸುವ ನೀರಜ್ ಶರ್ಮಾ ಮತ್ತು ವಿಜಯ್ ಎಂದಿನಂತೆ ತಮ್ಮ ದ್ವಿಚಕ್ರ ವಾಹನದ ಮೇಲೆ ಕೆಲಸಕ್ಕಾಗಿ ಮುಕ್ತಸರಕ್ಕೆ ಹೋಗುತ್ತಿದ್ದರು. ಲಾಕ್ಡೌನ್ ಜಾರಿಯಲ್ಲಿರುವದರಿಂದ ಬಸ್ ಇಲ್ಲದ ಕಾರಣ, ವಿಜಯ್ ಪಕ್ಕದಲ್ಲಿ ವಾಸಿಸುವ ಸುಖ್ಪಾಲ್ ಕೌರ್ ಅವರು ಮುಕ್ತಸರ್ ನಲ್ಲಿ ವಾಸಿಸುವ ತಮ್ಮ ಮಗಳನ್ನು ಭೇಟಿಯಾಗಲು ದ್ವಿಚಕ್ರ ವಾಹನದ ಮೇಲೆ ಹೊರಟಿದ್ದರು. ಅಲ್ಲಿಂದ ವಾಡಾ ದಾರಕಾ ಸಮೀಪದಲ್ಲಿ ಹೋಗುತ್ತಿರುವಾಗ ಸುಖ್ಪಾಲ್ ಕೌರ್ ಅವರ ಸ್ಕಾರ್ಫ್ ಬೈಕ್ನ ಚೈನ್ ನಲ್ಲಿ ಸಿಲುಕಿಕೊಂಡಾಗ ಅವರು ಬೈಕ್ ಮೇಲಿಂದ ಕೆಳಗಡೆ ಉರುಳಿ ಬಿದ್ದರು. ಬಿದ್ದಾಗ ಅವರ ಕುತ್ತಿಗೆ ದೇಹದಿಂದ ಕತ್ತರಿಸಿ ದೂರಬಿದ್ದಿತು ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದಾರೆ.
ಬಸ್ ಇಲ್ಲದ ಕಾರಣ ಮೃತ ಮಹಿಳೆ ತನ್ನ ಮಗಳನ್ನು ಭೇಟಿಯಾಗಲು ಪಕ್ಕದ ಮನೆಯ ಯುವಕನೊಂದಿಗೆ ಮುಕ್ತಸರಕ್ಕೆ ತೆರಳುತ್ತಿದ್ದ ವೇಳೆ ನಡುರಸ್ತೆಯಲ್ಲಿ ಮಹಿಳೆಯ ಸ್ಕಾರ್ಫ್ ಸರದಲ್ಲಿ ಸಿಕ್ಕಿಬಿದ್ದಿದೆ ಎಂದು ತನಿಖಾಧಿಕಾರಿ ಎ.ಎಸ್.ಐ. ಹಕಮ್ ಸಿಂಗ್ ಹೇಳಿದರು. ಮೃತ ಮಹಿಳೆಯ ಪುತ್ರ ಜಸ್ವೀರ್ ಸಿಂಗ್ ಹೇಳಿಕೆಯ ಮೇರೆಗೆ ಸಿಆರ್ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.