ಬಿಗ್ ಬಾಸ್ ಹಾಗೂ ರಾಜ ರಾಣಿ ಖ್ಯಾತಿಯ ಸಮೀರ್ ಆಚಾರ್ಯ (Sameer Acharya) ಮತ್ತು ಶ್ರಾವಣಿ(Shravani) ದಂಪತಿಗಳು ತಮ್ಮ ಅಭಿಮಾನಿಗಳಿಗೆ ಈ ಹಿಂದೆ ಗುಡ್ ನ್ಯೂಸ್ ನೀಡಿದ್ದರು. ಸಮೀರ್ ಆಚಾರ್ಯರವರ ಪತ್ನಿ ಶ್ರಾವಣಿ ತಾವು ಗರ್ಭಿಣಿಯಾಗಿರುವುದಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದರು ಇದರಿಂದ ಅಭಿಮಾನಿಗಳೆಲ್ಲ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳಿಗೆ ಶುಭಾಶಯಗಳನ್ನು ಕೂಡ ತಿಳಿಸಿದ್ದರು. ಇದೀಗ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳಿಗೆ ಹೆಣ್ಣು ಮಗು ಒಂದು ಜನಿಸಿದ್ದು ಈ ದಂಪತಿಗಳು ತಮ್ಮ ಮಗುವಿನ ಜನನದಿಂದ ತುಂಬಾ ಖುಷಿ ಪಟ್ಟಿದ್ದಾರೆ.

 

 

ಈ ಹಿಂದೆ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿದ್ದ ಸಮೀರ್ ಆಚಾರ್ಯ ಎಲ್ಲರಿಗೂ ಪರಿಚಿತರಾಗಿದ್ದಾರೆ. ಬಿಗ್ ಬಾಸ್ ಮುಗಿದ ನಂತರ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳು ರಾಜಾರಾಣಿ ಎಂಬ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿ ಈ ಜೋಡಿ ಅಲ್ಲು ಕೂಡ ಕನ್ನಡಿಗರ ಮನಸನ್ನು ಗೆದ್ದಿತ್ತು. ರಾಜ ರಾಣಿ ಶೋನಲ್ಲಿ ಮನಸ್ಸಿನ ಮಾತು ಹೇಳಿಕೊಳ್ಳಲು ಒಂದು ಟಾಸ್ಕನ್ನು ನೀಡಿದ್ದರು ಅದರಲ್ಲಿ ಶ್ರಾವಣಿ ತನಗೆ ಒಂದು ಮಗು ಬೇಕು ಎಂದು ಸಮೀರ್ ಆಚಾರ್ಯರವರನ್ನು ಕೇಳಿದರು ಆ ಎಪಿಸೋಡ್ ಒಂದು ಎಮೋಷನಲ್ ಎಪಿಸೋಡ್ ಆಗಿದ್ದು ಎಲ್ಲಾ ಜೋಡಿಗಳು ತಮ್ಮ ಮನಸ್ಸಿನಲ್ಲಿರುವ ಮಾತು ಗಳನ್ನು ತಮ್ಮ ಪತಿ ಹಾಗೂ ಪತ್ನಿಯ ಹತ್ತಿರ ಹೇಳಿಕೊಳ್ಳುತ್ತಿದ್ದರು.

 

 

ಸಮೀರ್ ಆಚಾರ್ಯ ಶ್ರಾವಣಿ ದಂಪತಿಗಳು ಬಿಗ್ ಬಾಸ್ ಹಾಗೂ ರಾಜ ರಾಣಿ ಶೋ ನಂತರ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆಕ್ಟಿವ್ ಆಗಿದ್ದು ತಮ್ಮ ಜೀವನದ ಹಾಗೂ ಹೋಗುಗಳ ಬಗ್ಗೆ ಫೋಟೋ ಹಾಗು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ತಮಗೆ ಹೆಣ್ಣು ಮಗು ಹುಟ್ಟಿರುವುದರ ಬಗ್ಗೆ ಹಂಚಿಕೊಂಡಿದ್ದು ಅದನ್ನು ಕೇಳಿದ ಅಭಿಮಾನಿಗಳೆಲ್ಲರೂ ಆ ದಂಪತಿಗಳಿಗೆ ಒಳ್ಳೆಯದಾಗಲಿ ಎಂದು ಶುಭಾಶಯಗಳು ಕೋರಿದ್ದಾರೆ.

 

 

ರಾಜ ರಾಣಿ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನಸನ್ನು ಗೆದ್ದಿದ್ದ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳು ತಮ್ಮ ಮೊದಲನೇ ಮಗುವಿನ ನೀರಿಕ್ಷೆಯಲ್ಲಿದ್ದರು. ಇತ್ತೀಚಿಗಷ್ಟೇ ಸಮೀರ್ ಆಚಾರ್ಯ ತಮ್ಮ ಪತ್ನಿ ಶ್ರಾವಣಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಕೂಡ ಮಾಡಿದ್ದರು ಶ್ರಾವಣಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮಗೆ ಹೆಣ್ಣು ಮಗು ಹುಟ್ಟಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಶ್ರಾವಣಿ ಹಾಗೂ ಸಮಿರ್ ಆಚಾರ್ಯರನ್ನು ತಮ್ಮ ಜೀವನದಲ್ಲಿ ಹೊಸ ಅದ್ಯಾಯ ಆರಂಭವಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ತುಂಬಾ ದಿನಗಳ ನಂತರ ಮಗು ಬರುತ್ತಿರುವುದರಿಂದ ಬಗ್ಗೆ ಖುಷಿಯಾಗಿದೆ ಎಂದು ಕೂಡ ಹೇಳಿದ್ದಾರೆ.

 

 

ರಾಜ ರಾಣಿ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಶ್ರಾವಣಿ ಹಾಗೂ ಸಮೀರ್ ಆಚಾರ್ಯರು ತಮ್ಮ ಜೀವನದ ಆಗುಹೋಗುಗಳ ಬಗ್ಗೆ ಸ್ಟೇಜ್ ಮೇಲೆ ಹಂಚಿಕೊಂಡಿದ್ದರು. ರಾಜ ರಾಣಿ ರಿಯಾಲಿಟಿ ಶೋನಲ್ಲಿ ಅವರಿಬ್ಬರು ತಮ್ಮ ಬಗ್ಗೆ ಹೇಳಿಕೊಳ್ಳುತ್ತಿರುವಾಗ ಈ ಹಿಂದೆ ಒಮ್ಮೆ ರಿಯಾಲಿಟಿ ಶೋ ಗೆ ಬರುವ ಮೊದಲು ಶ್ರಾವಣಿಗೆ ಮಿಸ್ ಕ್ಯಾರೇಜ್ ಆಗಿದ್ದು ಇದರ ಬಗ್ಗೆ ತುಂಬಾ ನೋವಾಗಿದೆ ಎಂದು ಕೂಡ ಹೇಳಿಕೊಂಡಿದ್ದರು. ಶ್ರಾವಣಿ ಹಾಗೂ ಸಮಿರ್ ಆಚಾರ್ಯ ದಂಪತಿಗಳು ಇದೀಗ ಮಗುವಿನ ಆಗಮನದಿಂದ ಖುಷಿಪಟ್ಟಿದ್ದಾರೆ.

Leave a comment

Your email address will not be published. Required fields are marked *