Ramya Tweet: ಭಾರತ ಕೇವಲ ಹಿಂದಿಯಲ್ಲ ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ. ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಅವರು, ಕನ್ನಡಿಗ ಆಟೋ ಚಾಲಕನೊಬ್ಬ ಹಿಂದಿವಾಲಿ ಮೇಲೆ ತಣ್ಣೀರು ಎರಚಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡ ಮಾತನಾಡುವುದಿಲ್ಲ ಎಂದು ತನ್ನೊಂದಿಗೆ ಜಗಳವಾಡಿದ ಹಿಂದಿ ಮಹಿಳೆಯನ್ನು ಆಟೋ ಚಾಲಕನೊಬ್ಬ ಕೆಳಗೆ ಎಳೆದ ವಿಡಿಯೋವನ್ನು ನಟಿ ರಮ್ಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಾಟು-ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಪಡೆದ ‘ಆರ್ಆರ್ಆರ್’ ತಂಡವನ್ನು ಅಭಿನಂದಿಸಿದ ನಟಿ ರಮ್ಯಾ, ‘ಭಾರತ ಕೇವಲ ಹಿಂದಿಯಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ನಾಟು-ನಾಟು ತೆಲುಗು ಹಾಡು ಈ ಸಾಧನೆ ಮಾಡಿದ್ದಕ್ಕೆ ತುಂಬಾ ಖುಷಿಯಾಗಿದೆ. ಭಾರತವು ವಿಭಿನ್ನ ಸಂಸ್ಕೃತಿಗಳು ಮತ್ತು ಭಾಷೆಗಳ ವೈವಿಧ್ಯಮಯ ದೇಶವೆಂದು ಈಗ ಜಗತ್ತಿಗೆ ತಿಳಿದಿದೆ. ಭಾರತ ಕೇವಲ ಹಿಂದಿಯಲ್ಲ. ಭಾರತ ಕೇವಲ ಬಾಲಿವುಡ್ ಅಲ್ಲ. ಭಾರತ ಎಂದರೆ ಹಿಂದಿ ಎಂಬ ಸಾಂಪ್ರದಾಯಿಕ ಚಿಂತನೆ ಸೋಮಾರಿತನ.
I’m also really glad Naatu Naatu was performed in Telugu – about time the world knows that India is a diverse country of different cultures and languages. India is not just Hindi. India is not just Bollywood. Stereotyping is lazy thinking. https://t.co/fGPhAMwkzX
— Ramya/Divya Spandana (@divyaspandana) March 13, 2023
ಬೆಂಗಳೂರಿನಲ್ಲಿ ಆಟೋದಲ್ಲಿದ್ದ ಮಹಿಳೆಯೊಬ್ಬರು ‘ನನಗೆ ಕನ್ನಡ ಬರುವುದಿಲ್ಲ, ಹಿಂದಿಯಲ್ಲಿ ಮಾತನಾಡು’ ಎಂದು ಚಾಲಕನನ್ನು ನಿಂದಿಸಿದ್ದಾರೆ. ಇದಕ್ಕೆ ಆಟೊ ಚಾಲಕ ಮಹಿಳೆಗೆ ‘ನೀನು ಕರ್ನಾಟಕದಲ್ಲಿ ಇದ್ದೀಯ, ಮೊದಲು ಕನ್ನಡ ಮಾತಾಡು, ನಾನೇಕೆ ಹಿಂದಿ ಮಾತನಾಡಬೇಕು’ ಎಂದು ಹೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕನ್ನಡ ಪರ ಹೋರಾಟಗಾರರು ಸೇರಿದಂತೆ ಲಕ್ಷಾಂತರ ಕನ್ನಡಿಗರು ಈ ವಿಡಿಯೋವನ್ನು ಬೆಂಬಲಿಸಿದ್ದಾರೆ.