Government Gift For Women On Varamahalakshmi Festival: ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಉಡುಗೊರೆ ನೀಡಲು (Government Gift For Women On Varamahalakshmi Festival) ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರ ನಿರ್ಧರಿಸಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಿಗೆ ಬರುವ ಮಹಿಳೆಯರಿಗೆ ಆಗಸ್ಟ್ 25 ರಂದು ವರಮಹಾಲಕ್ಷ್ಮಿ ಹಬ್ಬದಂದು ಅರಿಶಿನ ಮತ್ತು ಕುಂಕುಮವನ್ನು ನೀಡಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ಇದೇ 25ರ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮಿ ವ್ರತ ನಡೆಯಲಿದೆ. ಈ ದಿನದಂದು ಎಲ್ಲಾ ಅಧಿಸೂಚಿತ ದೇವಾಲಯಗಳಿಗೆ ಆಗಮಿಸುವ ಮಹಿಳೆಯರಿಗೆ ಅರಿಶಿನ, ಕುಂಕುಮ ಮತ್ತು ಬಳೆಗಳನ್ನು ಅರ್ಪಿಸಲಾಗುತ್ತದೆ. ಆಯಾ ದೇವಸ್ಥಾನಗಳ ಪರವಾಗಿ ಉತ್ತಮ ಗುಣಮಟ್ಟದ ಕಸ್ತೂರಿ, ಅರಿಶಿನ-ಕುಂಕುಮ ಮತ್ತು ಹಸಿರು ಬಳೆಗಳನ್ನು ತಂದು ದೇವರ ಮುಂದೆ ಪೂಜಿಸಿ ಮಹಿಳೆಯರಿಗೆ ಗೌರವಾರ್ಥವಾಗಿ ನೀಡಲು ಆದೇಶಿಸಲಾಗಿದೆ.

ಪ್ರತಿ ವರ್ಷದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತವಿರುತ್ತದೆ ಮತ್ತು ಸ್ವರ್ಣ ಗೌರಿ ವ್ರತ ಮತ್ತು ನವರಾತ್ರಿಯಲ್ಲೂ ಸ್ತ್ರೀ ದೇವತೆಗೆ ಪೂಜಿಸಲಾಗುತ್ತದೆ. ಈ ದಿನ ಸ್ತ್ರೀಯರು ಮನೆಯಲ್ಲಿ ಶುಚಿರ್ಭೂತರಾಗಿ ವರ ಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿ ದೇವರ ದರ್ಶನಾರ್ಥಿಯಾಗಿ ದೇವಾಲಯಗಳಿಗೆ ಬಂದು ಅರಿಶಿನ, ಕುಂಕುಮ, ಹೂವು ಮುಂತಾದ ಪ್ರಸಾದಗಳನ್ನು ಸ್ವೀಕರಿಸುತ್ತಾರೆ. ಪ್ರಸಾದದ ರೂಪವು ಕಾಗದದ ಲಕೋಟೆಗಳಲ್ಲಿ ಅರಿಶಿನ ಮತ್ತು ಕುಂಕುಮವಾಗಿದೆ. ದೇವಸ್ಥಾನದ ಹೆಸರನ್ನು ಸರ್ಕಾರದ ಹೆಸರನ್ನು ಮುದ್ರಿಸಿ ದೇವಸ್ಥಾನಕ್ಕೆ ಬರುವ ಮಹಿಳೆಯರಿಗೆ ನೀಡುವಂತೆ ಸೂಚಿಸಲಾಗಿದೆ.

ಕಳೆದ ವರ್ಷ ಆಚರಿಸಿದಂತೆ 2023ರ ಆಗಸ್ಟ್ 25 ಶುಕ್ರವಾರದಂದು ಬರುವ ವರ ಮಹಾಲಕ್ಷ್ಮಿ ವ್ರತದ ದಿನದಂದು ಎಲ್ಲಾ ಅಧಿಸೂಚಿತ ದೇವಸ್ಥಾನಗಳಿಗೆ ಆಗಮಿಸುವ ಮಹಿಳೆಯರು ಆಯಾ ದೇವಸ್ಥಾನಗಳಿಂದ ಉತ್ತಮ ಗುಣಮಟ್ಟದ ಕಸ್ತೂರಿ, ಅರಿಶಿನ-ಕುಂಕುಮ ಮತ್ತು ಹಸಿರು ಬಳೆಗಳನ್ನು ತಂದು ಇಡಬೇಕು. ದೇವರ ಮುಂದೆ ಪೂಜೆ ಸಲ್ಲಿಸಿ, ಗೌರವಪೂರ್ವಕವಾಗಿ ಮಹಿಳೆಯರಿಗೆ ನೀಡಿ ಆಯಾ ದೇವಸ್ಥಾನದ ನಿಧಿಯಿಂದ ನಿಯಮಾನುಸಾರ ವೆಚ್ಚ ಭರಿಸುವಂತೆ ತಿಳಿಸಿದರು.