The Kashmir Files: ಫೆ20ರಂದು ನಡೆದ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯಲ್ಲಿ ಕಳೆದ ವರ್ಷ ಮಾರ್ಚ್ ನಲ್ಲಿ ತೆರೆಕಂಡ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆದುಕೊಂಡಿತ್ತು.ಈ ಚಿತ್ರವು 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತ್ ನರಮೇಧದ ಕ್ರೂರತೆಯನ್ನು ತೋರಿಸುವ ಮೂಲಕ ಸಂಚಲನವನ್ನು ಸೃಷ್ಟಿಸಿತು. ಒಂದು ವಿಭಾಗವು ಇನ್ನೂ ಚಿತ್ರವನ್ನು ಟೀಕಿಸುತ್ತಿದೆ. ಚಿತ್ರದಲ್ಲಿ ತೋರಿಸಿರುವುದು ಕಾಲ್ಪನಿಕ ಎಂದಿದ್ದಾರೆ.
ಆದರೆ ಈ ಕ್ರೌರ್ಯದಿಂದ ವೈಯಕ್ತಿಕವಾಗಿ ಆಘಾತಕ್ಕೊಳಗಾದ ಕಾಶ್ಮೀರಿ ಪಂಡಿತರು ತಮಗಾದ ಅನ್ಯಾಯದ ಬಗ್ಗೆ ಧ್ವನಿ ಎತ್ತಿದರು. ಈ ಚಿತ್ರದಲ್ಲಿ ತೋರಿಸಿರುವ ಕ್ರೌರ್ಯವೆಲ್ಲ ನಿಜ. ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿ ತಾವು ಅನುಭವಿಸಿದ ಸಂಪೂರ್ಣ ಘಟನೆಯನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ ಎನ್ನುತ್ತಾರೆ ಅವರು.
ದಿ ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಬಾಲಿವುಡ್ ನಟ ಅನುಪಮ್ ಖೇರ್ ಅವರು ಕಾಶ್ಮೀರಿ ಪಂಡಿತರಿಗೆ ಸಹಾಯ ಹಸ್ತ (ದೇಣಿಗೆ) ಚಾಚಿದ್ದಾರೆ. ದೆಹಲಿಯಲ್ಲಿ ನಡೆದ ಗ್ಲೋಬಲ್ ಕಾಶ್ಮೀರಿ ಪಂಡಿತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ನಿಮ್ಮಿಂದ ಆಶೀರ್ವಾದ ಪಡೆದಿದ್ದೇವೆ. ನಿಮಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ,’’ ಎಂದು ಐದು ಲಕ್ಷ ರೂಪಾಯಿ ದೇಣಿಗೆ ಘೋಷಿಸಿದರು.
ಇದೆಲ್ಲದರಿಂದಾಗಿ ಕಾಶ್ಮೀರಿ ಪಂಡಿತ್ ಕಾನ್ಕ್ಲೇವ್ನಲ್ಲಿ ಮಾತನಾಡಿದ ಅನುಪಮ್ ಖೇರ್, ‘ನಮ್ಮ ಜನರಿಗೆ ಸಹಾಯ ಹಸ್ತ ಚಾಚುವ ಸಮಯ ಬಂದಿದೆ. ಈ ಸಮಯದಲ್ಲಿ ನಾವು ಕಾಶ್ಮೀರಿ ಪಂಡಿತರ ಜೊತೆ ನಿಲ್ಲಬೇಕು. ನಾವು ಅವರಿಂದ ಹಣ ಸಂಪಾದಿಸಿದೆವು. ಆ ಎಚ್ಚರಿಕೆ ನಮಗಿರಬೇಕು’ ಎಂದು ಭಾವುಕರಾಗಿ ಮಾತನಾಡಿದರು.
The Kashmir Files: ಕಾಶ್ಮೀರಿ ಪಂಡಿತರಿಗೆ ಐದು ಲಕ್ಷ ರೂಪಾಯಿ ಸಹಾಯ ಹಸ್ತ ಚಾಚಿದ ನಟ ಅನುಪಮ್ ಖೇರ್
The Kashmir Files: ಫೆ20ರಂದು ನಡೆದ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯಲ್ಲಿ ಕಳೆದ ವರ್ಷ ಮಾರ್ಚ್ ನಲ್ಲಿ ತೆರೆಕಂಡ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆದುಕೊಂಡಿತ್ತು.ಈ ಚಿತ್ರವು 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತ್ ನರಮೇಧದ ಕ್ರೂರತೆಯನ್ನು ತೋರಿಸುವ ಮೂಲಕ ಸಂಚಲನವನ್ನು ಸೃಷ್ಟಿಸಿತು. ಒಂದು ವಿಭಾಗವು ಇನ್ನೂ ಚಿತ್ರವನ್ನು ಟೀಕಿಸುತ್ತಿದೆ. ಚಿತ್ರದಲ್ಲಿ ತೋರಿಸಿರುವುದು ಕಾಲ್ಪನಿಕ ಎಂದಿದ್ದಾರೆ.
ಆದರೆ ಈ ಕ್ರೌರ್ಯದಿಂದ ವೈಯಕ್ತಿಕವಾಗಿ ಆಘಾತಕ್ಕೊಳಗಾದ ಕಾಶ್ಮೀರಿ ಪಂಡಿತರು ತಮಗಾದ ಅನ್ಯಾಯದ ಬಗ್ಗೆ ಧ್ವನಿ ಎತ್ತಿದರು. ಈ ಚಿತ್ರದಲ್ಲಿ ತೋರಿಸಿರುವ ಕ್ರೌರ್ಯವೆಲ್ಲ ನಿಜ. ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿ ತಾವು ಅನುಭವಿಸಿದ ಸಂಪೂರ್ಣ ಘಟನೆಯನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ ಎನ್ನುತ್ತಾರೆ ಅವರು.
ದಿ ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಬಾಲಿವುಡ್ ನಟ ಅನುಪಮ್ ಖೇರ್ ಅವರು ಕಾಶ್ಮೀರಿ ಪಂಡಿತರಿಗೆ ಸಹಾಯ ಹಸ್ತ (ದೇಣಿಗೆ) ಚಾಚಿದ್ದಾರೆ. ದೆಹಲಿಯಲ್ಲಿ ನಡೆದ ಗ್ಲೋಬಲ್ ಕಾಶ್ಮೀರಿ ಪಂಡಿತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ನಿಮ್ಮಿಂದ ಆಶೀರ್ವಾದ ಪಡೆದಿದ್ದೇವೆ. ನಿಮಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ,’’ ಎಂದು ಐದು ಲಕ್ಷ ರೂಪಾಯಿ ದೇಣಿಗೆ ಘೋಷಿಸಿದರು.
ಇದೆಲ್ಲದರಿಂದಾಗಿ ಕಾಶ್ಮೀರಿ ಪಂಡಿತ್ ಕಾನ್ಕ್ಲೇವ್ನಲ್ಲಿ ಮಾತನಾಡಿದ ಅನುಪಮ್ ಖೇರ್, ‘ನಮ್ಮ ಜನರಿಗೆ ಸಹಾಯ ಹಸ್ತ ಚಾಚುವ ಸಮಯ ಬಂದಿದೆ. ಈ ಸಮಯದಲ್ಲಿ ನಾವು ಕಾಶ್ಮೀರಿ ಪಂಡಿತರ ಜೊತೆ ನಿಲ್ಲಬೇಕು. ನಾವು ಅವರಿಂದ ಹಣ ಸಂಪಾದಿಸಿದೆವು. ಆ ಎಚ್ಚರಿಕೆ ನಮಗಿರಬೇಕು’ ಎಂದು ಭಾವುಕರಾಗಿ ಮಾತನಾಡಿದರು.